ಗುರುವಾರ, ಸೆಪ್ಟೆಂಬರ್ 15, 2011

ಕಳಚಿತೋ.... ನಾಯಾಕರ ವೇಷಗಳೂ....

           
                        "ಯೇನ್ ಕಿಟ್ಟಣ್ಣ! ಥೀಯೇಟ್ರನಾಗ ಒಂದು ಪಿಚ್ಛರ್ ರಿಲೀಸ್ ಆಗಂಗಿಲ್ಲ ಜೇಬು ಖಾಲಿ ಮಾಡ್ಕಂಡು ನೊಡಾಕ ವೋಗೋನು, ಇವತ್ತೇನ್ ಕೋರ್ಟ್ ಕಡೆ ಬಂದ್ಬೀಟೀದಿಯಲಾ...?" ಲಾಯೇರ್ ಸಾಹೇಬ, ತನ್ನ ವಕ್ರದೃಷ್ಟಿಯನ್ನ ತನ್ನ ಮನೆಗೆ ಕೆಲಸಕ್ಕೆ ಬರುವ ಅಂಬಮ್ಮನ ಪತಿರಾಯನಲ್ಲಿ ಬೀಳಿಸುತ್ತಾ, ಪ್ರಶ್ನೆಯನ್ನಾ ಎಸೆದೇ ಬಿಟ್ಟಾ.
"ಯೇನಿಲ್ಲಾ ಸಾಮಿ, ನಮ್ಮ ದರ್ಶನಣ್ಣೋರ ದರುಸನ ಪಡ್ಯೋಕೆ ಬಂದೇವ್ನಿ. ಅವ್ವರೇ ಅಲ್ಲವಾ ಸಾಮಿ ನಮ್ಮ ಪ್ರತ್ಯಕ್ಷ ದ್ಯಾವ್ರು, ಸ್ಫೂರ್ತಿ... ಯಲ್ಲಾ.... ಯಲ್ಲಾವಾ..!!"-ಕಿಟ್ಟಣ್ಣ
"ಆಹಾ!! ಹೊದಾ ಕಣ್ಲಾ..! ನಿಮ್ಮ ಆರಾಧ್ಯ ದಯ್ಯ!!! ಪೂಜೆ-ಗೀಜೆ, ಹ್ವಾಮ.... ಯೇನಾರಿ ಮಡ್ಕಂಡಿರೇನೋ??"- ಲಾಯೇರ್ ಸಾಹೇಬ.
"ನ್ಹೂ..ಮತೆ ಸಾಮೇರೇ.... ಅದ್ನ ಮಾಡದೇ ನಮ್ಮಣ್ಣೋರ ಹೆಂಗ ಬಿಡುಗಡೆ ಮಾಡ್ಸದು... ನೀವೆ ಹೇಳ್ಯಾರ? ನಮ್ಮ ಕಾಳಮ್ಮನ ಗುಡಿತಾವಿನ ಅರ್ಚಕರ ಮ್ಯಾಗ ಸ್ವಂತ ಅಮ್ಮನೇ ಬಂದು ಹೇಳ್ಯಾದ ಸಾಮಿ... ದರುಸನ ಹೆಂಡ್ತಿಮ್ಯಾಗ ಕಾಳಮ್ಮನ ಮೂನ್ನೂರ ಇಪ್ಪತ್ತನೇ ಜನುಮದಾಗ ಅವ್ಳಿಂದ ರಕ್ತಕಾರ್ಕಂಡು ಸತ್ತ, ರಕ್ಕಸನ ದೆವ್ವ ಮೆಟ್ಕಂಡೈತಂತೆ. ಅದ್ನ ವೋಡ್ಸಾಕ, ನಮ್ಮ-ನಮ್ಮ ಹೆಂಡಿರ್ನೆಲ್ಲಾ... ವೊದ್ದೆಬಟ್ಟೆಮ್ಯಾಲ ಉರ್ಳುಸೇವೆ, ಕೆಂಡದಮ್ಯಾಗ ಹೆಜ್ಜೆ, ಹತ್ತತ್ತು ಕುರಿ-ಕೊಳಿ ಕೊಡಾಕ ಹೇಳ್ಯಾದ." ಅಂದ ಕಿಟ್ಟಣ್ಣ ಭಯ-ಭಕ್ತಿ ತುಂಬಿದ ಧನಿಯಲ್ಲಿ.
"ಭಳೀರೇ ಕಿಟ್ಟಪ್ಪಾ!!ಹ್ಹೋ..ಹ್ಹೋ.. ಹ್ಹೋ..! ಭಾರೀ ಡಿಮ್ಯಾಂಡು ಕಣ್ಲಾ ಕಾಳಮ್ಮಂದು..! ವಿಜಯಲಕ್ಷ್ಮಿ ಮೇಲೆ ಮೆಟ್ಗಂಡಿರ ದಯ್ಯಾ ವೋಡ್ಸಾಕ ನಿನ್ ಹೆಂಡ್ತಿತಾವ ಕೆಂಡಸೇವೆ ಮಾಡಸ್ಬೀಕು ಅಂತಿದ್ದೀ ಅಂತಾಯ್ತು. ಮತ್ತೇ... ಬೆತ್ತಲೆ ಸೇವೇ.... ಏನಾರಿ ಐತನ್ಲನಾ???" ಮನೆಯಾಕಿನ ಜೊತೆ ಕಿಲ-ಕಿಲ ನಗುವಾಗ ಕುಲು-ಕುಲುಗೊಡುವ ತುಂಬಿದ  ಅಂಬಮ್ಮನ್ನ ಪೊಗದಸ್ತಾದ ಏರು-ತಗ್ಗುಗಳನ್ನ ನೆನಪಿಸಿಕೊಳ್ಳುತ್ತಾ, ಗಹಗಹಿಸಿ ನಗುತ್ತಾ.... ತನ್ನ ಜೊಲ್ಲಿನ್ನಿಂದ ಕಿಟ್ಟಣ್ಣನ್ನ ವೊರಟು ಮುಖವನ್ನ ತೋಯಿಸಿ, ಸಣ್ಣ ಧನಿಯಲ್ಲಿ, ಸ್ವಲ್ಪ ಭಾಗಿ ಕೇಳಿದ.... ದಿ ಗ್ರೇಟ್ ಲಾಯರ್ರಪ್ಪ!!
"ಯೇನ್ ಸಾಮಿ ತಮಾಷೆ ಮಾಡೇರ್ರೀ!! ತಪ್ಪು-ತಪ್ಪು!! ಈವಾಗ ಇದ್ನ ಮಾಡ್ಸಿ, ಪರಿಹಾರ ಕಂಡ್ಲಿಲ್ಲ ಅಂತಾದ್ರೆ, ಮುಂದಿನ ಬಾರಿ ಅದ್ನೇ ನೋಡಾನ ಅಂತ ಹೇಳ್ಯಾರ... ಪೂಜಾರ್ರಪ್ಪ!!" ಎನ್ನುತ್ತಾ ಲಾಯರ್ರಪ್ಪ ನುಡಿದ ಮಾತಿಗೆ ಕಾಳಮ್ಮ ಎಲ್ಲಿ ಮುನಿಸಿಕೊಂಡಾಳೋ ಎನ್ನುವ ಭಯದಿಂದಲೋ ಯೇನೋ.... ಐದು ಬಾರಿ ಪಟ-ಪಟನೇ ಕೆನ್ನೆಗೆ ಬಾರಿಸಿಕೊಳ್ಳುತ್ತಾ... ಅಲ್ಲೇ ಬಿದ್ದ ಜೊಲ್ಲನ್ನೂ ವೊರೆಸಿಕ್ಳುತ್ತಾ ಮತ್ತೆ ಹೇಳಿದಾ.... "ಹಂಗೇನಾರಿ ಇದ್ರೆ ನಿಮ್ಗೆ ತಿಳ್ಸದ್ದೇ ಬಿಡಕಾಗ್ತದಾ ಸಾಮೇರೆ?? ತಿಳ್ಸುಬುಡ್ತೀನಿ, ನಿಮ್ಮ ಬಳಗದವ್ರನ್ನ ಕರ್ಕಂಡು ಬಂದು ನಮ್ಮನೆ ಕಾಳಮ್ಮನ ದರುಸನ ಮಾಡ್ಯೋಗಿ ಸಾಮಿ...... ವಸೀ ಇವತ್ತಿನ ಕರ್ಚಿಗ್ಯಾನಾದ್ರೂ ಇದ್ರೆ.......!!" ಆ ಎಂಜಲುವರೆಸಿದ ಕೈಯಲ್ಲೇ... ತಲೆಕೆರೆದು ಕೊಳ್ಳುತ್ತಾ....ಹಲ್ಲು ಗಿಂಜಿದ, ಕೊಳೆತು ನಾರುತ್ತಿರುವ ತನ್ನ ಮನಸ್ಸಿನ ಪ್ರತೀಕದಂತಿರುವ ತನ್ನ ಕೊಳೆತ ಹತ್ತೂ ಹಲ್ಲುಗಳನ್ನ ತೋರಿಸುತ್ತಾ!!!!

********************************************************************************

                    "ಯೇನ್ಲಾ ತಿಪ್ಪಾ... ಹೆಂಗಯ್ತ್ಲಾ ಇವತ್ತಿನ ಕನೆಕ್ಷನ್ನು??" ಯಮನಿಗೆ ಸಡ್ಡು ಹೊಡೆಯುವಂತ ದೊಡ್ಡೊಟ್ಟೆಯ ಮೇಲೆ ಕೈ-ಯಾಡಿಸುತ್ತಾ..... ಬ್ಲಾಕ್-ಟಿಕೇಟ್ ಮಾರುವ ತಿಪ್ಪಾನ ಹತ್ತಿರ ಕೇಳಿದ ಪೋಲಿಸಣ್ಣಾ.
"ಅಣ್ಣೋ... ಯೇ..ನಿಲ್ಲಾಣ್ಣೋ.... ಬೆಳಗಿನ ಶೋ ದಿಂದ ರಾತ್ರಿ ಶೋ ವರೆಗೂ ಕಾದು ಕುತ್ಕಂಡೇನಿ, ವೊಬ್ನೆ ವೊಬ್ಬಾ ನುಶಿ ಆಸಾಮಿ ಈಕಡೆ ಹಾರಿ ಬಂದಿಲ್ಲಾ!!" ಬೇಸರದ ಧನಿಯಲ್ಲಿ ನುಡಿದ ತಿಪ್ಪಾ.
"ಯಾಕ್ಲಾ?? ಯೇನಾಯ್ತ್ಲಾ ಎಲ್ರಿಗೂ??"-ಪೋಲಿಸಣ್ಣ.
"ಯೇನಣ್ಣಾ ಹೇಳಾದು? ಥಿಯೇಟ್ರಿನ ಪರದೆ ಮ್ಯಾಗ ಬಣ್ಣ ಹಚ್ಕಂಡು ಕುಣಿಯೋ ನಾಯಕ್ರೆಲ್ಲಾ, ಕ್ಯಾಮರಾ-ಬಣ್ಣ ಎಲ್ಲಾ ಕಳಚ್ಕೋಂಡು ನಿಜ ಜೀವಂದಾಗ್ಲೇ ಕುಣೀಯಾಕ ಹತ್ಬೀಟಿದಾರ್ರ! ನೀವು ತೋರ್ಸೊ ಪಿಚ್ಚರ್ಗಿಂತ ನ್ಯೂಸ್ ಛಾನೆಲ್ಲವ್ರೇ... ರಿಯಲ್ಲಾಗಿ ತೋರಿಸ್ತಾರ್ರೆ! ಮತ್ಯಾಕೋ ನಿಮ್ಮ ಪುಟ್ಕೋಸಿ ಥಿಯೇಟರ್ರು!!? ಅಂತ ಮುಖಕ್ ಉಗ್ದು ಹೋಗ್ತಾರಣ್ಣೋ....!" -ತಿಪ್ಪಾ.
 "ಹೊದನ್ಲನಾ.... ಯೇನ್ ಗತಿ ಬಂದ್ಬಿಡ್ತೋ?? ಮಹಾ-ಮಹಾನ್ ನಾಯಕ್ರೆಲ್ಲಾ ಇಂಗಾಗ್ಬೀಟ್ರೆ ನಮ್ಮ ಗತಿಯೇನ್ಲಾ?" ಎನ್ನುತ್ತಾ ಕೈಯನ್ನ ಸೀದಾ ತಿಪ್ಪನ ಹರಕು ಜೇಬಿಗೆ ಹಾಕಿ, ಅಲ್ಲಿರುವ ನೂರರ ಮೂರು ನೋಟನ್ನ ಕಸಿದು ತನ್ನ ಜೇಬಿಗೆ ಹಾಕ್ಕೋಂಡ ದೇಸ ಕಾಯುವ ನಾಯಕ!
"ಅಣ್ಣೋ..!! ಮಗಿಗೆ ಹುಷಾರಿಲ್ಲಣ್ಣೋ...! ಮೆಡಿಸ್ಸಿನ್ನು ತಗೋಳ್ಳಾಕ ಮಡ್ಕಂಡಿದ್ದೆ........" ಕರುಳ ಬಳ್ಳಿಯ ನೋವನ್ನ ಮನಸ್ಸಿನಲ್ಲೇ ನೆನೆಸಿ ಕೊಳ್ಳುತ್ತಾ..... ಆರ್ದ ಧನಿಯಲ್ಲಿನುಡಿದ....ತಿಪ್ಪ.
"ಯೇನ್ಲಾ.... ಸುಳ್ಳು ಭೊಗಳ್ತೀಯಾ... ಬ್ಯಾವರ್ಸಿ! ಕತ್ಲಾಗ್ತಿದ್ದಂಗೆ ಬ್ಯಾರಣ್ಣನ ಬಾರ್ನಾಗ ಕಂಠಮಠ ಕುಡ್ಕಂಡು, ಬಿದ್ಕಂಡಿರ್ತೀಯಂತೆ...." ಅನ್ನತ್ತನ್ನುತ್ತಾ......  ಸರಕಾರದವ್ರು ಕೊಟ್ಟಾ ಬುಲೆಟ್ಟನ್ನಿನ ಮೇಲೆ ತನ್ನ ಧಢೋತಿ ಶರೀರವನ್ನ ಹೇರಿಕೊಂಡು.... ಟುರ್ರ್.... ಅಂತ ಛಾಲೂ ಮಾಡಿ... ಯಮನ ಪ್ರತಿರೂಪವಾಗಿ.... ಧಾವಿಸಿಯೇ ಬಿಟ್ಟ........!!!

********************************************************************************

              "ಟೈಟ್.... ಟೈಟು.... ಪುಲ್ಲು ಟೈಟು...." ಹಾಡೇಳುತ್ತಾ, ಝೂಂ.. ಅಂತ ಹಾರಿಬರುತ್ತಿರುವ ಸೊಳ್ಳೆರಾಯನನ್ನ, ತಿಗಣೆ ತನ್ನ ಬಡಕಲು ಶರೀರವನ್ನ ಅಲ್ಲಾಡಿಸುತ್ತಾ , ಹೊರಬರಲು ಒದ್ದಾಡಿಸುತ್ತಿರುವಾಗಿನ ಮಾತನ್ನು ಕಷ್ಟಪಟ್ಟು ಹೊರಹಾಕಿ ತಡೆದುನಿಲ್ಲಿಸುವಂತೆ ಮಾಡಿತು.
"ಅರ್ರೇ.. ತಿಗಣೆಯಣ್ಣಾ.... ಚೆನ್ನಾಗಿದಿಯಾ??"-ಸೊಳ್ಳೆರಾಯ.
"ಯೇನ್ ಚೆನ್ನಾಗಿರೋದೋ ಯೇನೋಪ್ಪಾ ರಾಯ! ಊಟ-ಉಪಚಾರ ಇಲ್ದೇ ನಾಕು ದಿನ ಕಳ್ದೋಯ್ತು ನೋಡಪ್ಪಾ!!"- ತಿಗಣೆಯ ಧನಿ ಹೊಟ್ಟೆವಸಿವನ್ನ ಎತ್ತಿ ತೋರಿಸುತಿತ್ತು.
"ಯಾಕಣ್ಣ... ಯೇನಾಯ್ತು??" ತನ್ನ ಕೀಳುಧನಿಯನ್ನ ಮತ್ತೂ ಕೀಳಾಗಿಸಿ ಕೇಳಿತು.... ರಾಯ....
"ಯೇನಂತಾ ಹೇಳ್ಳಪ್ಪಾ!! ನಿಂಗೇ ಗೊತ್ತಿರ್ಬೇಕಲ್ಲಾ ಥಿಯೇಟರ್ರ್ ಖಾಲಿಯಾದದ್ದು!! ಅದಿರ್ಲಿ, ನೀ ಯೇನ್ ಭಲು ಖುಷಿಯಿಂದ ಹಾಡೇಳ್ತಾ ಬರ್ತೀದಿಯಲ್ಲಾ.... ಯೇನ್ ರಾಯ ವಿಶೇಷ... ಯೆಲ್ಲೋ.. ಮದುವೆ ಊಟ ಮಾಡ್ಕಂಡೇ ಬಂದಿದ್ದಿ ಅಂತಾಯ್ತು??" ಆಸೆಯ ಗಣ್ಣೀನಲ್ಲಿ ನುಡಿಯಿತು ತಿಗಣೆಯಣ್ಣ.
"ವೋಗಣ್ಣೋ...! ಮದುವೇನಾ?? ಅಲ್ಲಿಗಿಂತನೂ ಪೊಗದಸ್ತು ಊಟ ಮಾಡಿ ಬರ್ತೀದಿನಿ ಅಣ್ಣಾ..!!" ಕಣ್ಣು ಮಿಟುಕಿಸುತ್ತಾ ನುಡಿಯಿತು ರಾಯ.
"ಯೇನೋಪ್ಪಾ!! ನಿಮಗೇನು? ದೇವ್ರು ಚಿನ್ನದಂತ ರೆಕ್ಕೆ ಕೊಟ್ಟಿದಾನೆ. ಮಲ್ಟಿ ಪ್ಲಸ್ಸು,ಪೆಕ್ಸ್, ಮಾಲ್ಲು ಗಳಲ್ಲೇ ಹಾರಾಡ್ತಾ ಇರ್ತೀರ್ರಾ. ನಮ್ದು ನೋಡು ಇದೇ ಲೋಕಲ್ಲು ಸಾರಾಯಿ ತುಂಬಿರೋ ರಕ್ತವೇ! ನಾಕುದಿನದಿಂದ ಅದೂ ಗತಿ ಇಲ್ಲ.. ನೋಡು!!" ಅಳಿದುಳಿದ ಉಸಿರೆನ್ನಲ್ಲ ಬಿಡುವೆನೋ ಎಂಬಂತೆ ನುಡಿಯಿತು ತಿಗಣೇಯಣ್ಣ..
ವೋಗಣ್ಣೋ.. ಯೇನ್ ಮಾಲ್ಲು ಇಲ್ಲಾ, ಸುಡುಗಾಡು ಇಲ್ಲಾ.... ಜೈಲ್ ನಿಂದ ಬರ್ತಿದೀನಿ ಅಷ್ಟೇ! ಹಾಕಿದಾರೆಲ್ಲಾ ಮಹಾನಾಯಕರನ್ನೆಲ್ಲಾ ಜೈಲಿನಲ್ಲಿ, ಅವ್ರ ಬಣ್ಣವನ್ನ ಕಳಚಿ. ಯೇನ್ ಪೊಗದಸ್ತು ಊಟ ಅಂತಿ, ಆಹಾ..! ಯೆಲ್ಲಾ ವಿದೇಶಿ ಕೊಳೆತ ದ್ರಾಕ್ಷಿಯ ಪ್ರಭಾವ!!" ಉದ್ದ ಸುಂಡಿಯ ನಾಲಿಗೆಯನ್ನ ಚಪ್ಪರಿಸುತ್ತಾ.... ಮತ್ತೆ ನುಡಿಯಿತು...."ಅಲ್ಲಿ ಇನ್ನೂ ಜನ್ರನ್ನ ತಗಂಡ್ಬಂದು ಹಾಕ್ತಾರಂತೆ. ನಮ್ಮ ಬಳಗಕ್ಕೆ ಸುದ್ದಿ ಮುಟ್ಸೋಕೆ ಹೊರ್ಟಿದೀನಿ." ಗುಂಯ್ ಗುಟ್ಟಿತು ಸೊಳ್ಳೆರಾಯ.
"ಮ್ಹೂ.... ನಿಮ್ಮದೇ ಭಾಗ್ಯ. ನಮ್ಮ ಋಣತೀರ್ತು ಅಂತಾಯ್ತು ಹಾಗಿದ್ರೆ ಈ ಭೂಮಿಮೇಲೆ" ಅನ್ನುತ್ತತ್ತನ್ನುತ್ತಲೇ... ಕಣ್ಣಿರು ಕೂಡ ಧಾರೆಯಾಗಿ ಉದುರತೊಡಗಿತು.
"ಹಯ್ಯೋ...!! ಯೇನ್ ಮಾತು ಅಂತ ಆಡ್ತೀಯಣ್ಣೋ?? ತಪ್ಪಾಯ್ತು ಅಂತದ್ಕೋ!! ನಾವು ಮನುಷ್ಯರ ರಕ್ತ ಕುಡೀಯೋರು ಅಂತ ಅವ್ರ ಬುದ್ಧಿನೇ ಬೇಳೆಸ್ಕೋಳೋಕೆ ಬರುತ್ತಾ? ರಕ್ತ ಅವ್ರದ್ಧಿರ್ಬಹುದು. ಆದರೆ ಬುದ್ಧಿ ನಮದೇ ಕಣಣ್ಣೋ... ನಿಮ್ಮ ಬಳಗನ್ನೂ ಕರ್ರೀ ಅಂತೀನಿ. ನಮ್ಜೋತೆ ನಿಮ್ಮನ್ನೂ ಹಾರಸ್ಕಂಡು ಹೊಂಡ್ತೀವಿ. ಇರದನ್ನಾ ಎಲ್ರೂ ಹಂಚ್ಕಂಡು ತಿನ್ನಾನ, ನಾವು ಬದ್ಕೋಣ, ನಮ್ಮವ್ರನ್ನೂ ಬದುಕಿಸೋಣ" ಅನ್ನುತ್ತಾ ಪುಢಾರಿಯ ವಿದೇಶಿ ಮಧ್ಯದ ಪ್ರಭಾವದ ಆಶ್ವಾಸನೆಯನ್ನ ನೀಡಿ..... ಹಾಡಿನ ಮುಂದಿನ ಸಾಲನ್ನ ನೆನಪಿಸಿಕೊಳ್ಳುತ್ತಾ ಗುಂಯ್ಯನೇ... ರೆಕ್ಕೆಯನ್ನ ಬಡಿಯತೊಡಗಿತು ಸೊಳ್ಳೆರಾಯ......" ಯಾವ ಬ್ರ್ಯೋಂಡೋ...... ಇಷ್ಟೋಂದು ಘಾಟೋ....!!!!"

ಕಣ್ಣೀರಿಡುತಿಹೆನು.... ಗೆಳತಿ....








ನಾನಿಲ್ಲಿಹೆನು ಗೆಳತಿ....
ನೀನ್ನಾ ನಗುಮುಖವ ನೋಡುತ್ತಾ..!
ನಾ ಕಣ್ಣೀರಿಡುತಿಹೆನು..
ನೀ ಬರೇ ನಗುಮುಖದ ಗೊಂಬೆಯಾಗಿಹೆಯೆಂದು!

ಕುಳಿತಲ್ಲಿಂದ ಅಲ್ಲಾಡುತ್ತಿಲ್ಲ ನಾ... ಗೆಳತಿ..
ಚಿತ್ತ-ಚಿತ್ರ ಪಟದಿಂದ ಅಳಿಸಿಹೋಗುವೆಯೆಂಬ ಭಯದಿಂದ!
ನಾ ಕಣ್ಣೀರಿಡುತಿಹೆನು...
ನೀ ಯಾವಾಗಲೂ... ನಗುತಿರಲೆಂದು!!

ನಾ ಅರಿತಿಹೆನು.... ಗೆಳತಿ...
ನಿನ್ನಾ ನಗುಮುಖದ ಹಿಂದಿನಾ ಮರ್ಮ ವನ್ನಾ...
ನಾ...ಕೇವಲಾ ಬೊಂಬೆಯಾಗಿಹೆನೆಂಬ ನೋವನ್ನಾ...!
ನಾ ಕಣ್ಣೀರಿಡುತಿಹೆನು...
ಮುನ್ನಾಂದಿನ.. ಆ ನೀರನ್ನೇ... ಸ್ವಾತಿಯ ಮುತ್ತನ್ನಾಗಿಸಿ...ಹಾರವಾಧರಿಸಿ
ಮತ್ತೂ ನಗಿಸುವ ಮಹದಾಸೆಯಿಂದ.......... :’( :’( :’( 



                                                                -ಪ್ರೀತಿಯ.... ಗಣೇಶಣ್ಣನಿಗರ್ಪಿತ......!!!!!